ನಂದಿನಿ ಕಂಬೈನ್ಸ್ ಲಾಂಛನದಲ್ಲಿ ಸಿದ್ದರಾಮಯ್ಯ ಅವರು ನಿರ್ಮಿಸಿರುವ ‘ಸೌಂದರ್ಯ ನಿಲಯ ಚಿತ್ರದ ಹಾಡುಗಳ ಸೀಡಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈಗಾಗಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು ಇದೇ ತಿಂಗಳಲ್ಲಿ ತೆರೆಗೆ ಬರಲಿದೆ.
ಕಮಲ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ನಿರ್ದೇಶಕರು ಗುರುಮೂರ್ತಿ. ನಾಗೇಂದ್ರರಾವ್ ಛಾಯಾಗ್ರಹಣ, ಕಿರಣ್ ಸಂಗೀತ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ, ಜಗ್ಗು, ಜೈಹರಿ, ಲಕ್ಷ್ಮಣ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಾನಪದ ಭಾರದ್ವಾಜ್ ಬರೆದಿದ್ದಾರೆ. ಅಭಿನಯಶ್ರೀ, ಬುಲ್ಲೆಟ್ ಪ್ರಕಾಶ್, ಕಮಲ್, ಕೆಂಪೇಗೌಡ, ರವಿರೆಡ್ಡಿ, ಮದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.